ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮಾರ್ಚ್ 10, 2011

371 ನೇವಿಧಿ ತಿದ್ದುಪಡಿ

371 ನೇವಿಧಿ ತಿದ್ದುಪಡಿ

ನಮ್ಮ ಭಾಗ ಅಭಿವೃದಿ ಆಗಬೇಕಾದರೆ , ಮುಖ್ಯವಾಗಿ ನಮ್ಮ ಭಾಗದ ಪುಡಾರಿಗಳು 371 ನೇ ವಿಧಿ ಮೇಲೆ ರಾಜಕೀಯ ಮಾಡುವದು ನಿಲ್ಲಿಸಲಿ .

ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳುವುದಕೊಸ್ಕರ 371 ನೇ ವಿಧಿ ತಿದ್ದು ಪಡಿ ಮಾಡ್ತಿವಿ, ನಮ್ಮ ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಮಾಡ್ತಿವಿ ಅಂತ ಹೇಳ್ತಾ ನಮ್ಮ ಮುಗ್ದ ಜನರ ಓಟು ಪಡೆದು ಖುರ್ಚಿ ಏರುತ್ತಿದ್ದಾರೆ. ಇಂಥ ಅಧಿಕಾರ ದಾಹಿ ಪುಡಾರಿಗಳಿಂದ ನಮ್ಮ ನಾಡು ಉದ್ದಾರ ಆಗೋದಿಲ್ಲ . ಇದರಿಂದ ನಮ್ಮ ಜನ ಬೇಸತ್ತಿದ್ದಾರೆ.

ಒಂದು "facebook" ಸೋಶಿಯಲ್ ನೆಟ್ವರ್ಕ್ ನ ಸಂದೇಶ ಗಳು ಇಜಿಪ್ಟ್ನ ನ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣವಾಯಿತು..ಕಾರಣ ಅಲ್ಲಿನ ಹೋರಾಟ ಪ್ರಾಮಾಣಿಕವಾಗಿತ್ತು ಮತ್ತು ನಿಸ್ವಾರ್ಥ್ವಗಿತ್ತು .

ಒಂದುವೇಳೆ ಕೆಲವು ರಾಜಕೀಯದವರ ಹೋರಾಟ ಪ್ರಾಮಾಣಿಕವಾಗಿ ಇದ್ದಾರೆ ಎಂದೋ ಈ371 ನೇ ವಿಧಿ ತಿದ್ದುಪಡಿ ಆಗ್ತಿತ್ತು .. ಇನ್ನಾದರೂ ಅಧಿಕಾರ ದಾಹದಿಂದ ಹೊರಬಂದು ಪ್ರಾಮಾಣಿಕ ಪ್ರಯತ್ನ ಮಾಡಿ.. ಇಲ್ಲವಾದರೆ ನಮ್ಮ ಮುಗ್ದ ಜನ ನಿಮ್ಮೆದುರೆ ತಿರುಗಿ ಬಿದ್ದರೆ ನಿಮಗೆ ಉಳಿಗಾಲವಿಲ್ಲ .. ನಮ್ಮ ಭಾಗದ ಅಭಿವೃದ್ದಿ ಕಲ್ಪನೆ ನಮ್ಮ ಭಾಗದ ಜನ ಪ್ರತಿನಿಧಿಗಳಲ್ಲಿ ಬರುವವರೆಗೂ ನಮ್ಮ ಭಾಗ ಉದ್ದಾರ ಆಗೋಲ್ಲ .. ಇಲ್ಲ ಜನ ಸಾಮಾನ್ಯರೇ ಒಂದು ಬೃಹತ್ತ್ ಕ್ರಾಂತಿ ಮಾಡ್ಬೇಕು . ಇದಕ್ಕೆ ಉತ್ತಮ ನಾಯಕತ್ವದ ಕೊರತೆ ಇದೆ. ಜೊತೆಗೆ ಎಸ್ಟೋ ಜನಕ್ಕೆ 371 ನೇ ವಿಧಿಅಂದ್ರೆ ಏನು ಅಂತ ಗೊತ್ತಿಲ್ಲ ಪ್ರತಿಯೊಬ್ಬರಿಗೂ 371 ನೇ ವಿಧಿ ಬಗ್ಗೆ ಮಾಹಿತಿ ಬೇಕು .. ಅಂದಾಗ ಮಾತ್ರ ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಸಾಧ್ಯ .

---- RJ Arun- (Radio jockey in 93.5 RED FM)

Email ID- a.arun770@gmail.com

ಕಾಮೆಂಟ್‌ಗಳಿಲ್ಲ: