ಪ್ರಚಲಿತ ಪೋಸ್ಟ್ಗಳು
-
ಅರುಣಕುಮಾರ ಧುತ್ತರಗಿ ಕನ್ನಡಕ್ಕೆ ಡಬ್ಬಿಂಗ ಬೇಡವೇ ಬೇಡ ಎಂದು ಕನ್ನಡ ಪರ ಮತ್ತು ಸಿನೆಮಾ ರಂಗದವರ ಅಭಿಪ್ರಾಯವಾಗಿದ...
-
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು. ನಮಗರಿವಿಲ್ಲದೇ ನಾವು ದೊಡ್ಡವರಾಗುತ್ತೆವೆ. ಬದುಕಲ್ಲಿ ಹರೆಯತನ ಬರುತ್ತದೆ. ಹರೆಯದ ವಯಸ್ಸಂದರೆ ಹಾಗೇನೆ, ಒಂದು ತರಹದ ಸುಮಧುರ...
-
RADIO JOCKEY or RJRJ or Radio Jockey has been with us for almost a century, but since the advent of FM channels the Radio Announcer suddenly...
-
ಅರೆ , ಏನಿದು... ? "ಮದುವೆ ಸೀಜನ- ಬೀಗರ ಮದುವೆ ಊಟ" ಅನ್ನೋ ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ ಅಲ್ವಾ? ..ಅಂತ ಅನಿಸಿದರೆ ಆಶ್ಚರ್ಯ ಇಲ್ಲ . ಜೋರಾಗಿ...
-
ಯಾಕೋ ಬಹಳ ದಿನಗಳಾದವು ಅಲ್ವಾ ?? ಬ್ಲಾಗ್ ನಲ್ಲಿ ಏನು ಬರಿದಿಲ್ಲ . ಕೆಲಸದ ಒತ್ತಡದಲಿ ಬರಿಯಲಿಕ್ಕೆ ಆಗಿಲ್ಲ . ಇವಾಗ ನಾನು ಬ್ಲೇಡ್ ರಾಜ ಕಾರ್ಯಕ್ರಮ ನಡೆಸ್ಕೊಡ್ತಾ ಇದ್...
-
ಸಿಂಚನ ನಿಮ್ಮ ಭಕ್ತಿ ರಸಧಾರೆ ಪ್ರತಿ ದೀನ ಬೆಳ್ಳಿಗ್ಗೆ ೦೬.೦೦-೦೭.೦೦ only on Super Hits 93.5 RED FM ಸಿಂಚನ ನಿಮ್ಮ ಭಕ್ತಿ ರಸಧಾರೆ ಪ್ರತಿ ದೀನ ಬೆಳ್ಳಿಗ್ಗೆ ೦೬....
-
Red FM is an Indian FM radio brand, with stations broadcasting at 93.5 megahertz in the cities of Mumbai, Delhi, Kolkata and Pune in additio...
-
ಅವಳೆಂದರೆ ಅವಳೇ ....ಈ ಅರುಣನ . ಚೆಲುವೆ ಅವಳೆಂದರೆ ಅವಳೇ ....ಈ ಅರುಣನ . ಚೆಲುವೆ ನಾನ್ಯಾಕೆ ಹೊಲಿಸಲಿ ಬೇರೆ ಸಿನಿಮಾ ತಾರೆಯರಿಗೆ ನನ್ನ ಕಲ್ಪನೆಯ ಚೆಲುವೆಯನ...
ಮಂಗಳವಾರ, ಮಾರ್ಚ್ 29, 2011
ವಿಶ್ವ ಕನ್ನಡ ಸಮ್ಮೇಳನ 2011- ಅಧಿಕೃತ ರೇಡಿಯೋ ಪಾಲುದಾರರು ನಿಮ್ಮ Super Hits 93.5 RED FM- ಬೆಳಗಾವಿಯಿಂದ ನೇರ ಪ್ರಸಾರ
ಗುರುವಾರ, ಮಾರ್ಚ್ 24, 2011
ಸುಂದರತೆ
ಸುಂದರತೆ
ಸುಂದರ ಮೊಗವ ಕಂಡು
ಸುಂದರವೇ ಸರ್ವಸ್ವವೆಂದು
ಸುಂದರವೇ ನನ್ನ ಭಾಗ್ಯವೆಂದು
ಸುಂದರವೇ ನನ್ನ ಹೃದಯವೆಂದು
ಸುಂದರ ಮೊಗವ ಕಂಡು
ಸುಂದರದ ಭಾವನೆಗಳಿಂದ
ಸುಂದರವಾದ ಕನಸುಕಂಡೆ
ಸುಂದರ ಕನಸು ನನಸಾಗಿಸಲು ಬಯಸಿದೆ
ಸುಂದರ ಮೊಗವ ಕಂಡು
ಸುಂದರ ಸೃಷ್ಟಿಗೆ ಹೋಲಿಸಿದೆ
ಸುಂದರವಾದ ಹೂವನ್ನು ಕಂಡು
ಸುಂದರ ಮೊಗವನು ನೆನೆದೆ
ಸುಂದರವಾದ ಹರೆಯದ ವಯಸ್ಸಿದು
ಸುಂದರತೆಯು ಮೊಗದಲ್ಲಿ ಕಾಣುವ
ಸುಂದರವಾದ ಹುಚು ಹರೆಯದ ವಯಸ್ಸಿದು
-- ರಚನೆ - ನಾನು ನಿಮ್ಮ RJ ಅರುಣ
ಸುಂದರ ಮೊಗವ ಕಂಡು
ಸುಂದರವೇ ಸರ್ವಸ್ವವೆಂದು
ಸುಂದರವೇ ನನ್ನ ಭಾಗ್ಯವೆಂದು
ಸುಂದರವೇ ನನ್ನ ಹೃದಯವೆಂದು
ಸುಂದರ ಮೊಗವ ಕಂಡು
ಸುಂದರದ ಭಾವನೆಗಳಿಂದ
ಸುಂದರವಾದ ಕನಸುಕಂಡೆ
ಸುಂದರ ಕನಸು ನನಸಾಗಿಸಲು ಬಯಸಿದೆ
ಸುಂದರ ಮೊಗವ ಕಂಡು
ಸುಂದರ ಸೃಷ್ಟಿಗೆ ಹೋಲಿಸಿದೆ
ಸುಂದರವಾದ ಹೂವನ್ನು ಕಂಡು
ಸುಂದರ ಮೊಗವನು ನೆನೆದೆ
ಸುಂದರವಾದ ಹರೆಯದ ವಯಸ್ಸಿದು
ಸುಂದರತೆಯು ಮೊಗದಲ್ಲಿ ಕಾಣುವ
ಸುಂದರವಾದ ಹುಚು ಹರೆಯದ ವಯಸ್ಸಿದು
-- ರಚನೆ - ನಾನು ನಿಮ್ಮ RJ ಅರುಣ
ಅಂತರಾಳದ ಕಡೆಗೆ
ಅಂತರಾಳದ ಕಡೆಗೆ
ಹೃದಯ ಸಮುದ್ರದಲ್ಲಿ
ಕಲ್ಪನಾ ಲೋಕದ ಸಂಚಾರದಲ್ಲಿ
ಪ್ರೀತಿಯ ದೋಣಿಯ ಮೇಲೆ
ಕನಸಿನ ರಾಣಿ ಪಯಣಿಸುತ್ತಿದ್ದಾಳೆ
ನನ್ನ ಅಂತರಂಗದ ಕಡೆಗೆ
ಬಾ ಒಲವೆ ಬಾ
ಅಂತರಾತ್ಮದ ಕದ ತಗೆದಿದೆ
ಹೃದಯದ ಬಾಗಿಲಲಿ ತೋರಣ ಕಟ್ಟಿದೆ
ಪ್ರೀತಿಯ ಹೂಗಳು ಸ್ವಾಗತಿಸುತ್ತಿವೆ
ಪ್ರೀತಿಯ ಜ್ಯೋತಿ
ಮನದೊಳಗೆ ಹಚ್ಚಲು
ಹೃದಯವನ್ನು ಪ್ರೀತಿಯಿಂದ ಬೆಳಗಿಸಲು
ನನ್ನ ಅಂತರಂಗದ ಕಡೆಗೆ ಬಾ
-- ರಚನೆ - ನಾನು ನಿಮ್ಮ RJ ಅರುಣ
ಹೃದಯ ಸಮುದ್ರದಲ್ಲಿ
ಕಲ್ಪನಾ ಲೋಕದ ಸಂಚಾರದಲ್ಲಿ
ಪ್ರೀತಿಯ ದೋಣಿಯ ಮೇಲೆ
ಕನಸಿನ ರಾಣಿ ಪಯಣಿಸುತ್ತಿದ್ದಾಳೆ
ನನ್ನ ಅಂತರಂಗದ ಕಡೆಗೆ
ಬಾ ಒಲವೆ ಬಾ
ಅಂತರಾತ್ಮದ ಕದ ತಗೆದಿದೆ
ಹೃದಯದ ಬಾಗಿಲಲಿ ತೋರಣ ಕಟ್ಟಿದೆ
ಪ್ರೀತಿಯ ಹೂಗಳು ಸ್ವಾಗತಿಸುತ್ತಿವೆ
ಪ್ರೀತಿಯ ಜ್ಯೋತಿ
ಮನದೊಳಗೆ ಹಚ್ಚಲು
ಹೃದಯವನ್ನು ಪ್ರೀತಿಯಿಂದ ಬೆಳಗಿಸಲು
ನನ್ನ ಅಂತರಂಗದ ಕಡೆಗೆ ಬಾ
-- ರಚನೆ - ನಾನು ನಿಮ್ಮ RJ ಅರುಣ
ನೀನಾಗಬೇಕು
ನೀನಾಗಬೇಕು
ಕಾವ್ಯದ ಚಿಗುರು ನೀನಾಗಬೇಕು
ಪದಗಳ ತುಂಬೆಲ್ಲ ನೀನಡಗಿರಬೇಕು
ಅಕ್ಷರಗಳಲ್ಲಿ ನಿನ್ನ ಮುಗುಳ್ನಗೆಯಿರಬೇಕು
ಏಕೆಂದರೆ ನೀನು ನನ್ನ ಕಾವ್ಯದ ವಸ್ತುವಗಬೇಕು
ನನ್ನ ಮನೆಯಂಗಳದ
ಹೂದೋಟ ನೀನಾಗಬೇಕು
ಪ್ರತಿಯೊಂದು ಹೂವುಗಳಲ್ಲಿ ...
ನಿನ್ನ ತುಟಿಯಂಚಿನ ನಗುವಿರಬೇಕು
ನನ್ನ ಮನೆಯ ಜ್ಯೋತಿ ನೀನಾಗಬೇಕು
ಭಾವನೆಗಳು ಬದುಕಬೇಕು
ಕನಸುಗಳು ಇರಬೇಕು
ಹೃದಯ ಸದಾ ಬಡಿತಿರಬೇಕು
ಬಡಿತದಲ್ಲಿ ನಿನ್ನ ಒಲವಿನ ನಾಡ ಇರಬೇಕು
ಒಲವಿನ ಗೀತೆ ಇರಬೇಕು
-- ರಚನೆ - ನಾನು ನಿಮ್ಮ RJ ಅರುಣ
ಕಾವ್ಯದ ಚಿಗುರು ನೀನಾಗಬೇಕು
ಪದಗಳ ತುಂಬೆಲ್ಲ ನೀನಡಗಿರಬೇಕು
ಅಕ್ಷರಗಳಲ್ಲಿ ನಿನ್ನ ಮುಗುಳ್ನಗೆಯಿರಬೇಕು
ಏಕೆಂದರೆ ನೀನು ನನ್ನ ಕಾವ್ಯದ ವಸ್ತುವಗಬೇಕು
ನನ್ನ ಮನೆಯಂಗಳದ
ಹೂದೋಟ ನೀನಾಗಬೇಕು
ಪ್ರತಿಯೊಂದು ಹೂವುಗಳಲ್ಲಿ ...
ನಿನ್ನ ತುಟಿಯಂಚಿನ ನಗುವಿರಬೇಕು
ನನ್ನ ಮನೆಯ ಜ್ಯೋತಿ ನೀನಾಗಬೇಕು
ಭಾವನೆಗಳು ಬದುಕಬೇಕು
ಕನಸುಗಳು ಇರಬೇಕು
ಹೃದಯ ಸದಾ ಬಡಿತಿರಬೇಕು
ಬಡಿತದಲ್ಲಿ ನಿನ್ನ ಒಲವಿನ ನಾಡ ಇರಬೇಕು
ಒಲವಿನ ಗೀತೆ ಇರಬೇಕು
-- ರಚನೆ - ನಾನು ನಿಮ್ಮ RJ ಅರುಣ
ಪ್ರೀತಿ ಮಿಥ್ಯ
ಪ್ರೀತಿ ಮಿಥ್ಯ
(ಈ ಕವನ ತುಂಬ ಹಳೆಯದ್ದು, ೨೦೦೫ ರಲ್ಲಿ ಬರೆದದ್ದು)
ಮಿಥ್ಯ ಎಲ್ಲವೂ ಮಿಥ್ಯ ,
ಪ್ರೇಮದ ವ್ಯಾಪ್ತಿಯೋಳಗಿರುವುದೆಲ್ಲ ಮಿಥ್ಯ .
ಸತ್ಯ ಎಲ್ಲವೂ ಸತ್ಯ ,
ನನ್ನ ಬದುಕಿನಲ್ಲಿ
ಅರಿವು ಮಾತ್ರ ಸತ್ಯ ..
ಪ್ರೇಮದ ಬಲೆಯಲ್ಲಿ ಬಿದ್ದು ,
ಉಸಿರಿಗೆ ಉಸಿರು ಸೇರಿಸುವ ತವಕದಲಿ
ಕನಸುಗಳ ಜಾತ್ರೆ ಮಾಡುವ ಸಂಧರ್ಬದಲ್ಲಿ
ಎಡವಿಬಿದ್ದು , ಫುಣ ಯೆಚೆತ್ತುಕೊಂಡೆ ನಾ
ತಿಳಿದುಕೊಂಡೆ ನಾ
ನನ್ನ ಬದುಕಿನಲ್ಲಿ ಪ್ರೇಮವೆಂಬುದು ಮಿಥ್ಯ ಮಿಥ್ಯ ಏಂದು..
ಮಾಯೆಯ ಮೋಹದೊಳಗೆ ಬಿದ್ದು
ಮಾಯೆಗು ಸ್ನೇಹವೆಂದು ತಿಳಿದು
ಅದಕ್ಕೆ ಮತ್ತೆ ಪ್ರೀತಿಯೆಂದು ಕರೆದು
ನಾನಗೆ ನಾನೇ ದ್ರೋಹ ಬಗೆದುಕೊಂಡೆ ..
ಪ್ರೇಮದ ಕಲ್ಪನೆಗಳು ಸತ್ಯ ಸತ್ಯ ಎಂದುಕೊಂಡು
ಮಿಥ್ಯದ ದಾರಿಯಲಿ ಸಾಗಿ ಸಾಗಿ,
ಕತ್ತೆಯ ಹಾಗೆ ಕನಸಿನಲೋಕದಲ್ಲಿ ತಿರುಗಿ ತಿರುಗಿ
ಕಲ್ಪನಾಲೋಕದಲ್ಲಿ ಅಂಧಕನಾಗಿ
ಹುಚ್ಚು ಹುಚ್ಚು ಭ್ರಮೆಗಳಿಂದ
ಪ್ರೇಮವೆಂಬ ಕಿಚಿನಿಂದ ..
ನನ್ನ ನಾನೇ ಸುಟ್ಟುಕೊಂಡೆ
ಆಗ,
ಬದುಕಿನ ಅರ್ಧ ಭಾಗ ಸುಟ್ಟುಕೊಂಡೆ
ಹಲವಾರು ಅವಾಂತರಗಳು ತಂದುಕೊಂಡೆ
ಅವಳಿಂದ ಎಚ್ಚೆತ್ತುಕೊಂಡೇ ನಾ ....
ಅವಳನ್ನು ಹೃದಯದಿಂದ ಬೇರ್ಪಡಿಸಿದೆ --
ನನ್ನ ಕನಸುಗಳು ಸತ್ತ ನಂತರ
ಕಟ್ಟಿದೆನು ಶಿಘ್ರದಲಿ ಹೊಸ ಬದುಕನ್ನು
ಅವಳಿರದ... ಅವಳ ನೆರಳು ಸುಳಿಯದ
ಅವಳೊಂದಿಗಿನ ಕನಸಿನ ಒಡನಾಟದ
ನೆನಪುಗಳು ಮರಕಳಿಸದ ಹಾಗೆ
ಹೊಸ ಗುರಿಯಡೆಗೆ ಪಾದವಿಟ್ಟೆ ನಾ ..
ಮಿಥ್ಯದಿಂದ ಕೂಡಿದ ಪ್ರೀತಿಯಿಂದ ಹೊರಬಂದು
ವಾಸ್ತವದ ಬದುಕಿನ ಒಳ ಹೊಕ್ಕು
ಜೀವನದ ಮರ್ಮವನ್ನು ತಿಳಿಕೊಂಡು
ಸ್ವಾಭಿಮಾನವನ್ನು ಅರಿವಿನ ಮುಖಾಂತರ ಪಡೆದುಕೊಂಡು
ಸಾಧಕನ ಬದುಕಿನ ಸಾಧನೆಯಡೆಗೆ ಸಾಗುತ್ತಿದ್ದೇನೆ
ಸಾಗುತ್ತಲಿರುತ್ತೇನೆ ,, ಸತ್ಯದ ಲೋಕದೊಳಗೆ
ಪ್ರೀತಿ ಮಿಥ್ಯವೆಂದು ತಿಳಿದು ,
ವಾಸ್ತವ ಸತ್ಯವೆಂದು ಅರಿತು .
-- ರಚನೆ - ನಾನು ನಿಮ್ಮ RJ ಅರುಣ .
(ಈ ಕವನ ತುಂಬ ಹಳೆಯದ್ದು, ೨೦೦೫ ರಲ್ಲಿ ಬರೆದದ್ದು)
ಮಿಥ್ಯ ಎಲ್ಲವೂ ಮಿಥ್ಯ ,
ಪ್ರೇಮದ ವ್ಯಾಪ್ತಿಯೋಳಗಿರುವುದೆಲ್ಲ ಮಿಥ್ಯ .
ಸತ್ಯ ಎಲ್ಲವೂ ಸತ್ಯ ,
ನನ್ನ ಬದುಕಿನಲ್ಲಿ
ಅರಿವು ಮಾತ್ರ ಸತ್ಯ ..
ಪ್ರೇಮದ ಬಲೆಯಲ್ಲಿ ಬಿದ್ದು ,
ಉಸಿರಿಗೆ ಉಸಿರು ಸೇರಿಸುವ ತವಕದಲಿ
ಕನಸುಗಳ ಜಾತ್ರೆ ಮಾಡುವ ಸಂಧರ್ಬದಲ್ಲಿ
ಎಡವಿಬಿದ್ದು , ಫುಣ ಯೆಚೆತ್ತುಕೊಂಡೆ ನಾ
ತಿಳಿದುಕೊಂಡೆ ನಾ
ನನ್ನ ಬದುಕಿನಲ್ಲಿ ಪ್ರೇಮವೆಂಬುದು ಮಿಥ್ಯ ಮಿಥ್ಯ ಏಂದು..
ಮಾಯೆಯ ಮೋಹದೊಳಗೆ ಬಿದ್ದು
ಮಾಯೆಗು ಸ್ನೇಹವೆಂದು ತಿಳಿದು
ಅದಕ್ಕೆ ಮತ್ತೆ ಪ್ರೀತಿಯೆಂದು ಕರೆದು
ನಾನಗೆ ನಾನೇ ದ್ರೋಹ ಬಗೆದುಕೊಂಡೆ ..
ಪ್ರೇಮದ ಕಲ್ಪನೆಗಳು ಸತ್ಯ ಸತ್ಯ ಎಂದುಕೊಂಡು
ಮಿಥ್ಯದ ದಾರಿಯಲಿ ಸಾಗಿ ಸಾಗಿ,
ಕತ್ತೆಯ ಹಾಗೆ ಕನಸಿನಲೋಕದಲ್ಲಿ ತಿರುಗಿ ತಿರುಗಿ
ಕಲ್ಪನಾಲೋಕದಲ್ಲಿ ಅಂಧಕನಾಗಿ
ಹುಚ್ಚು ಹುಚ್ಚು ಭ್ರಮೆಗಳಿಂದ
ಪ್ರೇಮವೆಂಬ ಕಿಚಿನಿಂದ ..
ನನ್ನ ನಾನೇ ಸುಟ್ಟುಕೊಂಡೆ
ಆಗ,
ಬದುಕಿನ ಅರ್ಧ ಭಾಗ ಸುಟ್ಟುಕೊಂಡೆ
ಹಲವಾರು ಅವಾಂತರಗಳು ತಂದುಕೊಂಡೆ
ಅವಳಿಂದ ಎಚ್ಚೆತ್ತುಕೊಂಡೇ ನಾ ....
ಅವಳನ್ನು ಹೃದಯದಿಂದ ಬೇರ್ಪಡಿಸಿದೆ --
ನನ್ನ ಕನಸುಗಳು ಸತ್ತ ನಂತರ
ಕಟ್ಟಿದೆನು ಶಿಘ್ರದಲಿ ಹೊಸ ಬದುಕನ್ನು
ಅವಳಿರದ... ಅವಳ ನೆರಳು ಸುಳಿಯದ
ಅವಳೊಂದಿಗಿನ ಕನಸಿನ ಒಡನಾಟದ
ನೆನಪುಗಳು ಮರಕಳಿಸದ ಹಾಗೆ
ಹೊಸ ಗುರಿಯಡೆಗೆ ಪಾದವಿಟ್ಟೆ ನಾ ..
ಮಿಥ್ಯದಿಂದ ಕೂಡಿದ ಪ್ರೀತಿಯಿಂದ ಹೊರಬಂದು
ವಾಸ್ತವದ ಬದುಕಿನ ಒಳ ಹೊಕ್ಕು
ಜೀವನದ ಮರ್ಮವನ್ನು ತಿಳಿಕೊಂಡು
ಸ್ವಾಭಿಮಾನವನ್ನು ಅರಿವಿನ ಮುಖಾಂತರ ಪಡೆದುಕೊಂಡು
ಸಾಧಕನ ಬದುಕಿನ ಸಾಧನೆಯಡೆಗೆ ಸಾಗುತ್ತಿದ್ದೇನೆ
ಸಾಗುತ್ತಲಿರುತ್ತೇನೆ ,, ಸತ್ಯದ ಲೋಕದೊಳಗೆ
ಪ್ರೀತಿ ಮಿಥ್ಯವೆಂದು ತಿಳಿದು ,
ವಾಸ್ತವ ಸತ್ಯವೆಂದು ಅರಿತು .
-- ರಚನೆ - ನಾನು ನಿಮ್ಮ RJ ಅರುಣ .
ಗುರುವಾರ, ಮಾರ್ಚ್ 17, 2011
ಬಾರಾ ಗೆಳತಿ ಬಣ್ಣದ ಹಬ್ಬಕ
ಬಾರಾ ಗೆಳತಿ ಬಣ್ಣದ ಹಬ್ಬಕ
ಮತ್ತೆ ಬಂತು ಗೆಳತಿ ಹೋಳಿ ಹುಣ್ಣಿಮೆ ,
ಹಚ್ಚಬೇಕು ಬಣ್ಣ ಗಲ್ಲಕ್ಕೆ ಮತ್ತೊಮ್ಮೆ,
ಮುತ್ತನಿಟ್ಟು ಮುದ್ದು ಮಾಡ್ಬೇಕು ಮಗದೊಮ್ಮೆ ,
ನಮ್ಮೂರಿಗೆ ಬಾ ಗೆಳತಿ ಸುಮ್ಮನೆ ..
ಕೆಂಪನ ಗಲ್ಲಕ ಹಚ್ತೀನಿ ಗುಲಾಬಿ ಬಣ್ಣ ,
ನಿನ್ನ ಕೆಂದುಟಿಗೆ ಕೊಡ್ತೀನಿ ಮುತ್ತನ್ನ,
ಬಾರಾ ಗೆಳತಿ ಬಣ್ಣದ ಓಕುಳಿ ಆಡೋಣ ,
ನಗು ನಗುತಾ ಸಕ್ಕರಿ ಸರ ತಿನ್ನೋಣ ,
ನಾವಿಬ್ರು ಕೂಡಿ ಕಡ್ಲಿ ಹುರ್ರಿಯೋಣ,
ಬೆಂಕ್ಯಾಗ ಖೊಬ್ರಿ ಸುಟ್ಟು ತಿನ್ನೋಣ,
ಬಾರಾ ಗೆಳತಿ ಬಣ್ಣದ ಆಟ ಆಡೋಣ
ಪ್ರೀತಿಯ ಬಣ್ಣ ಹಚ್ಚಿ ಖುಷಿಯಗಿರೋಣ .. ..
ರಚನೆ- ನಾನು ನಿಮ್ಮ RJ ಅರುಣ .
Superhits 93.5 RED FM.
ಸೋಮವಾರ, ಮಾರ್ಚ್ 14, 2011
ಆಗುತ್ತಿಲ್ಲವಲ್ಲ ಗೆಳತಿ .!
ಹತ್ತಿರವಿಲ್ಲ ಗೆಳತಿ ನಿನ್ನ ಮನೆ ,
ಆಗುತ್ತಿಲ್ಲವಲ್ಲ ..
ಹೊತ್ತಾರೆಯೇದ್ದು ನಿನ್ನ ಮೊಗ ನೋಡಲು ...!
ನಿಮ್ಮುರಲ್ಲಿಲ್ಲ ಮೊಬೈಲ್ ನೆಟ್ವರ್ಕು
ಆಗುತ್ತಿಲ್ಲವಲ್ಲ ..
ನಿನ್ನೊಡನೆ ಹೆಚ್ಚಿಗೆ ಮಾತನಾಡಲು .. !
ಗೊತ್ತಿಲ್ಲವಲ್ಲ ನಿನ್ನ ವಿಳಾಸ .
ಆಗುತ್ತಿಲ್ಲವಲ್ಲ ..
ಬಸ್ಸನೇರಿ ನಿನ್ನುರಿಗೆ ಬರಲು ...!
ಆಗುತ್ತಿಲ್ಲವಲ್ಲ ..
ಗೆಳತಿ .!
ನಿನ್ನ ಮರೆಯಲು ...
ಆಗುತ್ತಿಲ್ಲವಲ್ಲ ..
ಹೊತ್ತಾರೆಯೇದ್ದು ನಿನ್ನ ಮೊಗ ನೋಡಲು ...!
ನಿಮ್ಮುರಲ್ಲಿಲ್ಲ ಮೊಬೈಲ್ ನೆಟ್ವರ್ಕು
ಆಗುತ್ತಿಲ್ಲವಲ್ಲ ..
ನಿನ್ನೊಡನೆ ಹೆಚ್ಚಿಗೆ ಮಾತನಾಡಲು .. !
ಗೊತ್ತಿಲ್ಲವಲ್ಲ ನಿನ್ನ ವಿಳಾಸ .
ಆಗುತ್ತಿಲ್ಲವಲ್ಲ ..
ಬಸ್ಸನೇರಿ ನಿನ್ನುರಿಗೆ ಬರಲು ...!
ಆಗುತ್ತಿಲ್ಲವಲ್ಲ ..
ಗೆಳತಿ .!
ನಿನ್ನ ಮರೆಯಲು ...
ರಚನೆ .- ನಾನು ನಿಮ್ಮ .... RJ ಅರುಣ
ಗುರುವಾರ, ಮಾರ್ಚ್ 10, 2011
371 ನೇವಿಧಿ ತಿದ್ದುಪಡಿ
371 ನೇವಿಧಿ ತಿದ್ದುಪಡಿ
ನಮ್ಮ ಭಾಗ ಅಭಿವೃದಿ ಆಗಬೇಕಾದರೆ , ಮುಖ್ಯವಾಗಿ ನಮ್ಮ ಭಾಗದ ಪುಡಾರಿಗಳು 371 ನೇ ವಿಧಿ ಮೇಲೆ ರಾಜಕೀಯ ಮಾಡುವದು ನಿಲ್ಲಿಸಲಿ .
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳುವುದಕೊಸ್ಕರ 371 ನೇ ವಿಧಿ ತಿದ್ದು ಪಡಿ ಮಾಡ್ತಿವಿ, ನಮ್ಮ ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಮಾಡ್ತಿವಿ ಅಂತ ಹೇಳ್ತಾ ನಮ್ಮ ಮುಗ್ದ ಜನರ ಓಟು ಪಡೆದು ಖುರ್ಚಿ ಏರುತ್ತಿದ್ದಾರೆ. ಇಂಥ ಅಧಿಕಾರ ದಾಹಿ ಪುಡಾರಿಗಳಿಂದ ನಮ್ಮ ನಾಡು ಉದ್ದಾರ ಆಗೋದಿಲ್ಲ . ಇದರಿಂದ ನಮ್ಮ ಜನ ಬೇಸತ್ತಿದ್ದಾರೆ.
ಒಂದು "facebook" ಸೋಶಿಯಲ್ ನೆಟ್ವರ್ಕ್ ನ ಸಂದೇಶ ಗಳು ಇಜಿಪ್ಟ್ನ ನ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣವಾಯಿತು..ಕಾರಣ ಅಲ್ಲಿನ ಹೋರಾಟ ಪ್ರಾಮಾಣಿಕವಾಗಿತ್ತು ಮತ್ತು ನಿಸ್ವಾರ್ಥ್ವಗಿತ್ತು .
ಒಂದುವೇಳೆ ಕೆಲವು ರಾಜಕೀಯದವರ ಹೋರಾಟ ಪ್ರಾಮಾಣಿಕವಾಗಿ ಇದ್ದಾರೆ ಎಂದೋ ಈ371 ನೇ ವಿಧಿ ತಿದ್ದುಪಡಿ ಆಗ್ತಿತ್ತು .. ಇನ್ನಾದರೂ ಅಧಿಕಾರ ದಾಹದಿಂದ ಹೊರಬಂದು ಪ್ರಾಮಾಣಿಕ ಪ್ರಯತ್ನ ಮಾಡಿ.. ಇಲ್ಲವಾದರೆ ನಮ್ಮ ಮುಗ್ದ ಜನ ನಿಮ್ಮೆದುರೆ ತಿರುಗಿ ಬಿದ್ದರೆ ನಿಮಗೆ ಉಳಿಗಾಲವಿಲ್ಲ .. ನಮ್ಮ ಭಾಗದ ಅಭಿವೃದ್ದಿ ಕಲ್ಪನೆ ನಮ್ಮ ಭಾಗದ ಜನ ಪ್ರತಿನಿಧಿಗಳಲ್ಲಿ ಬರುವವರೆಗೂ ನಮ್ಮ ಭಾಗ ಉದ್ದಾರ ಆಗೋಲ್ಲ .. ಇಲ್ಲ ಜನ ಸಾಮಾನ್ಯರೇ ಒಂದು ಬೃಹತ್ತ್ ಕ್ರಾಂತಿ ಮಾಡ್ಬೇಕು . ಇದಕ್ಕೆ ಉತ್ತಮ ನಾಯಕತ್ವದ ಕೊರತೆ ಇದೆ. ಜೊತೆಗೆ ಎಸ್ಟೋ ಜನಕ್ಕೆ 371 ನೇ ವಿಧಿಅಂದ್ರೆ ಏನು ಅಂತ ಗೊತ್ತಿಲ್ಲ ಪ್ರತಿಯೊಬ್ಬರಿಗೂ 371 ನೇ ವಿಧಿ ಬಗ್ಗೆ ಮಾಹಿತಿ ಬೇಕು .. ಅಂದಾಗ ಮಾತ್ರ ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಸಾಧ್ಯ .
---- RJ Arun- (Radio jockey in 93.5 RED FM)
Email ID- a.arun770@gmail.com
ಶುಕ್ರವಾರ, ಮಾರ್ಚ್ 4, 2011
ಮುಂಜಾನೆಯ ಮೊಗದವಳು
ಮುಂಜಾನೆಯ ಮೊಗದವಳು
ಮುಂಜಾನೆಯ ಮಲ್ಲಿಗೆ ಅರಳಿದ ಹಾಗೆ ,
ನಿನ್ನ ಮೊಗದ ಮೇಲೆ ನಗುವ ಕಂಡೆ ,
ಹಾರುತ್ತ ಬರುವ ದುಂಬಿಯ ಹಾಗೆ,
ನಾ ಓಡೋಡಿ ನಿನ್ನ ಬಳಿ ಬಂದೆ .
ಮೂಡಣದಿ ಮೂಡಿರಲು ಸೂರ್ಯನ ಕಿರಣಗಳು ,
ನಿನ್ನ ಮೊಗದ ತುಂಬೆಲ್ಲ ಹೊನ್ನಿನ ಮೆರಗು,
ಹೊಳೆಯುತ್ತಿವೆ ನಿನ್ನ ವಜ್ರದಂಥಹ ಕಣ್ಣುಗಳು ,
ನಿನ್ನ ಕಂಡು ನಾಚುತ್ತಿವೆ ಮನೆಯಂಗಳದ ಮಲ್ಲಿಗೆ, ಸಂಪಿಗೆಗಳು ..
ಸುರಿಸಲೇ ನಾ ನಿನ್ನ ತುಟಿಮೇಲೆ ಮುತಿನ ಸುರಿಮಳೆಯು.
ರಚನೆ .- ನಾನು RJ ಅರುಣ ..
ಗುರುವಾರ, ಮಾರ್ಚ್ 3, 2011
ಓ ನನ್ನ ಒಡಲಾಳದ ಗೆಳತಿ,
ಓ ನನ್ನ ಒಡಲಾಳದ ಗೆಳತಿ,
ನೀ ನನ್ನ ಲೀಲಾವತಿ .
ನನ್ನ ಮನೆ ದೀಪ ಹಚ್ಚಲು ಯಾವಾಗ ಬರ್ತಿ ..
ಕಾದು ಉಳಿತಿರುವೆ ನನ್ನ ಸಖಿ ,
ಬಾ ಬೇಗ ನೀ ನನ್ನ ಚಂದ್ರಮುಖಿ ..
ಮನೆಯಂಗಳದಿ ಬಂದು ಕುಣಿದಾಡು
ಅಂಗಳದಲಿ ಪ್ರೇಮದ ರಂಗವಲಿ ಹಾಕು ..
ಮೊಗವ ಕಾಣದೆ , ಮನಸು ಕಂಡೆ ..
ಮನಸು ಕಾಣುತ , ಹೃದಯ ಕಂಡೆ..
ಹೃದಯದೊಳಗೆ ನಿನ್ನ ಒಲವು ಕಂಡೆ ..
ನಿನ್ನೊಳು ನನ್ನ ಕಂಡೆ ,
ಹೇ ಮುದ್ದು ಮನದ ಹುಡುಗಿ ,
ತೋರಿಸೆ ನಿನ್ನ ಮೊಗದ ಚೆಲುವ..
ಕಾಡಿಸಬೇಡ ನನ್ನ ಬೆಡಗಿ,
ನೀ ಬಾ ಬೇಗ ನನ್ನ ಒಡಲಿಗೆ
-ರಚನೆ- ನಾನು RJ ಅರುಣ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)