ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜುಲೈ 4, 2014

ಡಬ್ಬಿಂಗ್‌ ಬೇಡ ಎನ್ನುವವರಿಗೆ ಒಂದಿಷ್ಟು ನನ್ನ ಪ್ರಶ್ನೆಗಳು

ಅರುಣಕುಮಾರ ಧುತ್ತರಗಿ 

















ಕನ್ನಡಕ್ಕೆ ಡಬ್ಬಿಂಗ ಬೇಡವೇ ಬೇಡ ಎಂದು ಪರ ಮತ್ತು ಸಿನೆಮಾ ರಂಗದವರ ಅಭಿಪ್ರಾಯವಾಗಿದೆ. ಈ ಕುರಿತು  ಮಾಧ್ಯಮಗಳಲ್ಲಿ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳನ್ನು ಹಲವರು ವ್ಯಕ್ತಪಡಿಸಿದ್ದಾರೆ. ಸಿನೆಮಾ ರಂಗದವರಂತು ಹೊರಾಟವನ್ನೇ ಮಾಡಿದ್ದಾರೆ. ಇವರ ಉದ್ದೇಶ ಇಷ್ಟೆ ಕನ್ನಡ ಉಳಿಯಬೇಕು ಮತ್ತು ಬೆಳೆಯಬೇಕು ಎಂದು ಸಿನೆಮಾರಂಗದವರು ಹೇಳುತ್ತಾರೆ. 
 
ಆದರೆ ಸಿನೆಮಾ ಕನ್ನಡದ ಸಿನೆಮಾ ರಂಗದವರು ನಿಜಕ್ಕು ಕನ್ನಡಕ್ಕಾಗಿ ಹೋರಾಡುತ್ತಿದ್ದಾರೋ ಅಥವಾ ತಮ್ಮ ಅಳಿವು ಉಳಿವಿಗಾಗಿ ಎಂಬ ಪ್ರಶ್ನೆ ಕೂಡ ಉಧ್ಬವಿಸುತ್ತದೆ. ಇವರೆಲ್ಲರು ಕನ್ನಡವನ್ನು ಪ್ರೀತಿಸುತ್ತಾರೆ, ಇದು ನಿಜಕ್ಕು ಸಂತಸದ ವಿಷಯ. ಆದರೆ ಇವರ ಕನ್ನಡ ಕೇವಲ ಸಿನೆಮಾಗೆ ಮಾತ್ರ ಸಿಮಿತವೇ ಎಂಬ ಪ್ರಶ್ನೆ ಕೂಡ ಉಧ್ಬವಿಸುವುದು ಸಹಜ. ಇವರೇನು ಕನ್ನಡದ ಪರವಾಗಿ ಡಬ್ಬಿಂಗ ವಿರೋಧಿಸುತ್ತಿದ್ದಾರೊ ಅಥವಾ ತಮ್ಮ ಹೊಟ್ಟೆ ಪಾಡಿಗಾಗಿ ಹೋರಾಡುತ್ತಿದ್ದಾರೊ ಎಂಬ ಪ್ರಶ್ನೇಗಳು ಉಧ್ಬವಿಸುತ್ತದೆ. 
 
 
ಕನ್ನಡ ಭಾಷೆ ಉಳಿಯಬೇಕು. ಬೆಳೆಯಬೇಕು ನಿಜ . ಆದರೆ  ಕನ್ನಡ ಚಿತ್ರರಂಗದವರ ಕನ್ನಡ ಪ್ರೇಮದ ಬಗ್ಗೆ ಕೂಡ ಸಂಶಯ ವ್ಯಕ್ತವಾಗುತ್ತದೆ. ಇವರು ಸಿನೆಮಾ ರಂಗದ ಕನ್ನಡ ಪರವಾಗಿ ಮಾತ್ರ ಇದ್ದಾರೆನೋ ಎಂದು ಅನಿಸುವುದು ಸಹಜ. ಇಲ್ಲಿಯವರೇಗೆ ಎಷ್ಟೊಂದು ಕನ್ನಡ ಪರ ಹೋರಾಟ ನಡೆದಿವೆ, ಆಗ ಡಾ,ರಾಜಕುಮಾರ ಇರುವವರೆಗೆ ಮಾತ್ರ ಕೆಲವೊಂದು ಕನ್ನಡ ಪರ ಚಳುವಳಿಗಳು ನಡೆದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕಾಗಿ ಚಿಂತ್ರರಂಗದವರ ಕೊಡುಗೆಯಾದರು ಏನು ? ಕೇವಲ ಡಬ್ಬಿಂಗ ಮಾತ್ರ ಬೇಡ ಎನ್ನುವುದು ಮಾತ್ರ ಕನ್ನಡ ಪ್ರೇಮವೋ ಅಥವಾ ಕನ್ನಡದ ಯಾವುದೇ ವಿಷಯಕ್ಕಾಗಿ ಇವರ ಹೋರಾಟವೋ ಎಂದು ಗೊತ್ತಾಗುತ್ತಿಲ್ಲ. 
 
ಕನ್ನಡ ಮತ್ತು ಕನ್ನಡಿಗಗರಿಗಾಗಿ ಏನಾದರು ಧಕ್ಕೆ ಬಂದರೆ ಕೇವಲ ಕನ್ನಡ ಪರ ಸಂಘಟನೆಗಳು ಮಾತ್ರ ಹೋರಾಟಕ್ಕೆ ಇಳಿಯುತ್ತಾರೆ. ಮತ್ತು ಈ ಹೋರಾಟದಲ್ಲಿ ಈ ಸಂಘಟನೆಯ ಕಾರ್ಯಕರ್ತರು ಪೋಲಿಸರಿಂದ ಲಾಟಿ ಏಟು ಕೂಡ ತಿಂದು ಕನ್ನಡದ ಪರ ನಿಲ್ಲುತ್ತಾರೆ. ಈ ಸಮಯದಲ್ಲಿ ಕನ್ನಡ ಪ್ರೇಮಿಗಳು ಎಂದು ಹೇಳಿಕೊಳ್ಳುವ ಸಿನೆಮಾರಂಗದವರು ತುಟಿ ಕೂಡ ಬಿಚ್ಚುವುದಿಲ್ಲ. ಈ ಸಮಯದಲ್ಲಿ ಏಕೆ ಇವರಿಗೆ ಬರುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. 
 
ಶಾಲೆಗಳಲ್ಲಿ ಕನ್ನಡ ಒತ್ತಾಯ ಪೂರ್ವಕವಾಗಿ ಕಲಿಸುವ ಹಾಗಿಲ್ಲ, ಮಾತೃಭಾಷೆ ಎನ್ನುವುದು ಕನ್ನಡವೇ ಇರಬೇಕಿಲ್ಲ. ತಮ್ಮ ತಂದೆ ತಾಯಿರ ಭಾಷೆ ಮಾತ್ರ ಮಾತೃಭಾಷೆ,  ಎಂದು ಸೂಪ್ರೀಂ ಕೋರ್ಟ್ ಮೊನ್ನೆ ತಾನೆ ಹೇಳಿತು. ಆದರೆ ಈ ಸಮಯದಲ್ಲಿ ಕನ್ನಡ ಪ್ರೇಮಿಗಳು ಎಂದು ಹೇಳಿಕೊಳ್ಳುವ ಸ್ಯಾಂಡಲ್‌ವುಡನವರು ಒಂದೇ ಒಂದು ಹೇಳಿಕೆ ನೀಡಿದ ಉದಾಹರಣೆ ಕಂಡು ಬರುತ್ತಿಲ್ಲ. 
 
ಇವರು ನಿಜಕ್ಕು ಕನ್ನಡ ಪ್ರೇಮಿಗಳು ಎಂದಾದರೆ , ಮಾತೃಭಾಷೆ ಕನ್ನಡವೇ ಆಗಬೇಕು ಎಂದು ಹೋರಾಟ ಮಾಡಬೇಕಿತ್ತು , ಕನಿಷ್ಠ ಒಂದು ಹೇಳಿಕೆಯಾದರು ನೀಡಬೇಕಿತ್ತು, ಯಾಕೆ ನೀಡಿಲ್ಲ ಎಂಬ ವಿಚಾರವು ಇವರ ಕನ್ನಡ ಪ್ರೇಮವನ್ನು ಪ್ರಶ್ನಿಸುವಂತಿದೆ.
 
ರಾಜ್ಯದಲ್ಲಿ ಬರಗಾಲದಿಂದ ರೈತರು ತತ್ತರಿಸುತ್ತಿದ್ದಾರೆ. ಇವರಿಗೆ ನಿಜಕ್ಕೂ ಕನ್ನಡಿಗರ ಬಗ್ಗೆ ಕಾಳಜೀ ಇದ್ದಿದ್ದರೆ, ಯಾಕೆ ಇಲ್ಲಿಯವರೇಗು ಒಂದೆ ಒಂದು ಹೇಳಿಕೆ ನೀಡಿಲ್ಲ. ಈಗ ಕನ್ನಡಿಗರಿಗೆ ಕುಡಿಯಲು ನೀರು ಇಲ್ಲ , ವಿಧ್ಯುತ್‌‌ ಇಲ್ಲ . ರೈತರು ತುಂಬಾನೆ ಕಷ್ಟದಲ್ಲಿದ್ದಾರೆ. ಈ ರೈತರ ಕೂಗು ಇವರ ಕಿವಿಗೆ ಕೇಳಿಸುತ್ತಿಲ್ಲ ಏಕೆ? ಇವರ ಕನ್ನಡ ಪ್ರೇಮ ಕೇವಲ ಸಿನೆಮಾಗಾಗಿ ಮಾತ್ರ ಎಂದು ಅನಿಸುವುದು ಸಹಜ. 
 
ಕನ್ನಡವನ್ನು ಅಷ್ಟೋಂದು ಪ್ರೀತಿಸುತ್ತೇವೆ ಎಂದು ಹೇಳುವ ಸ್ಯಾಂಡ್‌‌‌ಲವವುಡ್‌‌‌ನವರು ಬೇರೆ ಭಾಷೆಯ ಸಿನೆಮಾದಲ್ಲಿ ನಟಿಸುವುದಾದರು ಏಕೆ? ಡಬ್ಬಿಂಗ ಮಾತ್ರ ಬೇಡ ಎಂದರೆ ಸಾಕೇ ? ಇವರು ಕೂಡ ಕನ್ನಡ ಬಿಟ್ಟು ಬೇರೆ ಸಿನೆಮಾದಲ್ಲಿ ನಟಿಸಬಾರದು. ಹೌದಲ್ಲವೆ?.  ಇತರ ಬಾಷೆಗಳಲ್ಲಿ ನಟಿಸಿ ಕೋಟಿಗಟ್ಟಲೆ ದುಡ್ಡನ್ನು ಪಡೆದು ಬೇರೆ ಭಾಷೆಗೆ ಬೆಂಬಲಿಸಿದ ಮೇಲೂ ಕೂಡ ಡಬ್ಬಿಂಗ ಬೇಡ ಎಂದು ಹೇಳುವ ಇವರಿಗೆ ನೈತಿಕ ಹಕ್ಕಿದೆಯೇ ? 
 
ಕನ್ನಡ ಸಿನೆಮಾದಲ್ಲಿ , ಹೊರ ರಾಜ್ಯದ ನಟಿಯರನ್ನು ಕರೆದುಕೊಂಡು ಬಂದು ನಟನೆ ಮಾಡಿಸುತ್ತಾರೆ. ಯಾಕೆ ಇವರಿಗೆ ಕರ್ನಾಟಕಲ್ಲಿ ಒಬ್ಬ ನಟಿ ಸಿಗೊದಿಲ್ಲವೆ? ಕನ್ನಡದಲ್ಲಿ ನಟನೆ ಮಾಡುವ ಯಾವ ಸುಂದರಿಯರು ಇಲ್ಲವೇ ? ತಮ್ಮ ಸಿನೆಮಾ ಓಡಬೇಕೆಂದು ಹೊರ ರಾಜ್ಯದ ನಟಿಯರನ್ನು ಕರೆತರುವುದು , ಆಮೇಲೆ ಡಬ್ಬಿಂಗ ವಿಷಯದಲ್ಲಿ ಮಾತ್ರ ನಾವು ಕನ್ನಡಿಗರೆಂದು ಹೇಳಿಕೊಳ್ಳುವುದು ಎಷ್ಟು ಸರಿ? 
 
ಬೇರೆ ಭಾಷೆಯ ಸಿನೆಮಾವನ್ನು ರಿಮೇಕ ಮಾಡುತ್ತಾರೆ, ಆಮೇಲೆ ಡಬ್ಬಿಂಗ ಬೇಡ ಎಂದು ಹೇಳುವುದು  ಎಷ್ಟು ಸರಿ? . ಯಾಕೆ ಕನ್ನಡದಲ್ಲಿ ಕಥೆಗಳಿಲ್ಲವೇ ? ಕನ್ನಡ ಸಾಹಿತ್ಯಕ್ಕೆ ಅಷ್ಟೊಂದು ಬರ ಬಂದಿದೆಯೇ? 
ಇನ್ಯಾರದೋ ಭಾಷೆಯ ಕಥೆ ತಂದು ಸಿನೆಮಾ ಮಾಡುವಾಗ ಇವರಿಗೆ ಕನ್ನಡದ ಬಗ್ಗೆ ಇರುವ ಪ್ರೇಮ ಎಲ್ಲಿ ಹೋಗುತ್ತದೆ?  ಕನ್ನಡ ಸಾಹಿತ್ಯಕ್ಕೆ ತನ್ನದೇ ಅದ ಹೆಸರು ಇದೆ. ಈ ಕನ್ನಡ ನಾಡಿನನಲ್ಲಿ ಒಂದು ಕಥೆ ಸಿಗೋದಿಲ್ಲ ಎಂದರೆ ಎಷ್ಟೋಂದು ದುರದುಷ್ಟಕರ ? ಇದೆಲ್ಲದರ ಮಧ್ಯೆ ಡಬ್ಬಿಂಗ ಮಾತ್ರ ಬೇಡ , ನಾವು ಕನ್ನಡಿಗರು , ಕನ್ನಡ ಉಳಿಯಬೇಕು ಎಂದು ಹೇಳುವುದೆಷ್ಟು ಸರಿ ? 
 
ಇದೆಲ್ಲವನ್ನು ನೋಡಿದಾಗ ಸ್ಯಾಂಡಲ್‌‌ವುಡ್‌‌ನವರು ಕೇವಲ ತಮ್ಮ ಹೊಟ್ಟೆ ಪಾಡಿಗಾಗಿ ಮಾತ್ರ ಡಬ್ಬಿಂಗ ಬೇಡ ಎನ್ನುತ್ತಿದ್ದಾರೆ ವಿನಃ ಕನ್ನಡದ ಮೇಲಿನ ಪ್ರೇಮಕ್ಕಾಗಿ ಅಲ್ಲ ಎಂಬ ಸಂಶಯ ಹುಟ್ಟುವುದು ಸಹಜ. 
 
ಇಷ್ಟಕ್ಕು ನಾನು ಇಲ್ಲಿ ಡಬ್ಬಿಂಗ ಪ್ರವಾಗಿ ಇಲ್ಲ. ಆದರೆ ಈ ನನ್ನ ಮನಸ್ಸಿನಲ್ಲಿ ಹುಟ್ಟುವುದೇನೆಂದರೆ ಈ ಕನ್ನಡ ಸಿನೆಮಾದವರ ಕನ್ನಡ ಪ್ರೇಮ ಎಷ್ಟರ ಮಟ್ಟಿಗೆ ಇದೆ ಎಂದು ಪ್ರಶ್ನೆ ಹುಟ್ಟುವುದು ಸಹಜ. 

-ಅರುಣಕುಮಾರ ಧುತ್ತರಗಿ 

ಭಾನುವಾರ, ಮೇ 11, 2014

ಓನ್‌‌‌ ಸೈಡ್‌ ಲವ್‌‌ : ಎಷ್ಟೊಂದು ಸುಮಧುರ

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು. ನಮಗರಿವಿಲ್ಲದೇ ನಾವು ದೊಡ್ಡವರಾಗುತ್ತೆವೆ. ಬದುಕಲ್ಲಿ ಹರೆಯತನ ಬರುತ್ತದೆ. ಹರೆಯದ ವಯಸ್ಸಂದರೆ ಹಾಗೇನೆ, ಒಂದು ತರಹದ ಸುಮಧುರ ಭಾವನೆಗಳ ವಯಸ್ಸು. ಅನ್ಯ ಲಿಂಗದ ವ್ಯಕ್ತಿಯನ್ನು ನೋಡಿದಾಗ ಮನಸ್ಸಿನಲ್ಲಿ ಒಂದು ರೀತಿಯ ತಳಮಳವಾಗುವ ವಯಸ್ಸಿದು. ಇದನ್ನು ಆಕರ್ಷಣೆ ಅನ್ನಬೇಕೋ ಅಥವಾ ಪ್ರೀತಿ ಎನ್ನಬೆಕೋ ಎಂದು ಯೋಚಿಸುವಷ್ಟರಲ್ಲಿಯೇ ನಮ್ಮ ಮನಸ್ಸಿನಲ್ಲಿ ಪ್ರೀತಿಯ ಹೂವೊಂದು ಅರಳಿರುತ್ತದೆ.

ಒಂದು ಜೀವ ನಮ್ಮ ಹೃದಯದೊಳಗಡೆ ಕೂತು , ಹುವಿನಂತಹ ನಗೆಯನ್ನು ಬೀರಿ  ಹೃದಯ ಬಡಿತ ಹೆಚ್ಚಿಸುತ್ತದೆ. ಪ್ರತಿದಿನವು ಆ ಹೂವಿನದ್ದೆ ಚಿಂತೆ ಆಗುತ್ತದೆ. ಅದರ ನಗು , ಅದರ ನೆರಳು, ಖುಷಿ ಎಲ್ಲವೂ ಚೆಂದ ಅನಿಸತೊಡಗುತ್ತದೆ. ನಾನು ಹೇಳಹೊರಟಿರುವುದೆನೆಂದರೆ, ಈ ಹರೆಯದ ಪ್ರೀತಿ ಒಂತರಾ ಸುಮಧುರ ಎನಸುತ್ತದೆ.

ನಮ್ಮ ಪಕ್ಕದ ಮನೆ ಹುಡುಗ/ಹುಡುಗಿ , ದಾರಿಯಲ್ಲಿ ಕಂಡ ಮುಖ, ಕ್ಲಾಸರೂಮ್ ಚೆಲುವೆ/ಚೆಲುವ, ಮಾವನ ಮಗ/ಮಗಳು ಹೀಗೆ ಯಾವುದೋ ಒಂದು ಜೀವ ನಮ್ಮ ಹೃದಯದೊಳಗಡೆ ನಮಗರಿವಿಲ್ಲದೇ ಬಂದು ಕೂಡುತ್ತದೆ. ಆಗ ಮನಸ್ಸಿನಲ್ಲಿ ಮಾತ್ರ ಏನೊ ತಳಮಳ ಪ್ರಾರಂಭವಾಗುತ್ತದೆ ಮತ್ತು ಖುಷಿ ಅನಿಸುತ್ತದೆ.

ಪ್ರತಿದಿನ ಅದೇ ಜೀವದ ಚಿಂತೆ, ಊಟಕ್ಕೆ ಕುಳಿತಾಗ, ಓದುತ್ತ ಕುಳಿತಾಗ , ಮಲಗುವಾಗ ಪ್ರತಿ ಕ್ಷಣವು ಆ ಜೀವದ್ದೆ ನೆನಪು ಬರುತ್ತದೆ ಹಾಗು ಈ ನೆನಪು ಮನಸ್ಸಿಗೆ ತುಂಬ ಹಿತವನ್ನು ನೀಡುತ್ತದೆ. ಇಷ್ಟೆಲ್ಲದರ ಮಧ್ಯೆ ಆ ವ್ಯಕ್ತಿ ನಮಗೆ ತುಂಬ ಹತ್ತಿರ ಎಂದು ಅನಿಸಿಬಿಡುತ್ತದೆ. ಆದರೆ ಆ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಲು ಮನಸ್ಸು ಬಯಸುತ್ತಿರುತ್ತದೆ. ಆದರೆ ಆ ಜೀವ ಅಪರಿಚಿತ ಆದರೂ , ನನ್ನ ಹೃದಯದ ಭಾಗ ಎಂದು ಅನಿಸುತ್ತದೆ.

ಇದನ್ನು ಓನ್ ಸೈಡ ಲವ್‌ ಎಂದು ಕರೆಯಬಹುದು. ಆ ಜೀವ, ಅದರ ನೆರಳು , ಆ ಜೀವದ ಧ್ವನನಿ ಕೇಳಿದರೂ ಕೂಡ ಮನಸ್ಸಿಗೆ ತುಂಬ ಖುಷಿ ಎನಿಸುತ್ತದೆ. ಆದರೆ ಆ ಜೀವ ನಮ್ಮ ಕಡೆ ನೋಡುವುದೇ ಇಲ್ಲ. ನಿಮ್ಮ ಹೃದಯದ ಬಡಿತ ಆ ಜೀವಕ್ಕೆ ಕೇಳಿಸುತ್ತಿರುವುದಿಲ್ಲ. ಆದರೆ ಆ ಜೀವದ ಪ್ರತಿ ಹೃದಯ ಬಡಿತ ನಿಮಗೆ ಕೇಳಿಸುವ ಹಾಗೆ ಅನಿಸುತ್ತಿರುತ್ತದೆ. ಇದನ್ನು ಓನ್ ಸೈಡ್‌ ಲವ್‌ ಎಂದು ಕರೆಯಲಾಗುತ್ತದೆ.  ಈ ಓನ್‌ ಸೈಡ ಲವ್‌ ಕೂಡ ತುಂಬಾ ಎಂಜಾಯ್‌ ಮಾಡುವ ಜನರು ಸಾಕಷ್ಟು ಜನ ಇದ್ದಾರೆ.

ನಮ್ಮ ಮನಸ್ಸಿನ ಭಾವನೆ , ಪ್ರೀತಿಯ ಮಾತುಗಳು , ನಮ್ಮ ಹೃದಯ ಬಡಿತ ಆ ಜೀವಕ್ಕೆ ಹೇಳಬೇಕೆನ್ನುವಷ್ಟರಲ್ಲ ಆ ಜೀವ ಮಾಯವಾಗಿರುತ್ತದೆ. ಆದರೆ ಆ ನೆನಪು ಮಾತ್ರ ಸದಾ ಕಾಲ ಹಾಗೆ .ಇರುತ್ತದೆ, ಪ್ರತಿಯೊಬ್ಬರ ಜೀವನದಲ್ಲಿ ಈತರಹದ ಓನ್‌‌‌ಸೈಡ್‌ ಲವರ್‌‌ಗಳು ಬಂದು ಹೋಗಿರುತ್ತಾರೆ. ಆ ಜೀವಿಯ ಹೆಸರು, ವಿಳಾಸ  ಏನು ಗೊತ್ತಿರುವುದಿಲ್ಲ, ಆದರೂ ಆತನು ನಮ್ಮ ಹೃದದೊಳಗಡೆ ಬಂದಿರುಯತ್ತಾನೆ ಅಥವಾ ಬಂದಿರುತ್ತಾಳೆ.

ಈ ಓನ್‌ ಸೈಡ್‌ ಲವ್‌‌ ನಮ್ಮ ಹೃದಯದೊಳಗಡೆ ಅರಳಿರುತ್ತದೆ , ಹಾಗೆ ಮಾಸಿ ಹೊಗುತ್ತದೆ. ಆದರೆ ನೆನಪು ಮಾತ್ರ ಹೊಗಿರುವುದಿಲ್ಲ. ಈಗ ಈ ತರಹದ ಒನ್‌‌ಸೈಡ್‌‌ ಲವ್‌ ನೆನೆಸಿಕೊಂಡು ನಮ್ಮ ಮುಖದ ಮೇಲೆ ನಗುವನ್ನು ತಂದುಕೊಳ್ಳುತ್ತೆವೆ. ಅದಕ್ಕೆ ಓನ್‌‌ಸೈಡ್‌ ಲವ್‌ ಸುಮಧುರ ಎನ್ನುವುದು. 

ಶುಕ್ರವಾರ, ಜೂನ್ 3, 2011

ಅವಳೆಂದರೆ ಅವಳೇ ....ಈ ಅರುಣನ . ಚೆಲುವೆ

ಅವಳೆಂದರೆ ಅವಳೇ ....ಈ ಅರುಣನ . ಚೆಲುವೆ




ಅವಳೆಂದರೆ ಅವಳೇ ....ಈ ಅರುಣನ . ಚೆಲುವೆ



ನಾನ್ಯಾಕೆ ಹೊಲಿಸಲಿ ಬೇರೆ ಸಿನಿಮಾ ತಾರೆಯರಿಗೆ ನನ್ನ ಕಲ್ಪನೆಯ ಚೆಲುವೆಯನು.. ?


ಬೇರಾವ ಚೆಲುವೆಗೆ ಹೋಲಿಸಲಾರೆ ..


ನನ್ನ ಕಲ್ಪನೆಯ ಕನಸಿನಲಿ ರಾಣಿ ಅವಳು ,


ಅವಳ ಚೆಲುವ ಕಂಡು ಕನ್ನಡಿಯೋಳಗಿರುವ ಅವಳ ಮೊಗಕೆ ಬಂತು ಅಸೂಯೆ ..


...ನನ್ನ ಕಲ್ಪನೆಯ ಚೆಲುವು , ಅವಳೇ ನನ್ನ ಜೀವನದ ಒಲವು- ಗೆಲುವು .


ಸಧ್ಯಕ್ಕೆ ನನ್ನ ಈ ಅರುಣನ ಕನಸಿನ ಕಲ್ಪನೆಯ ಲೋಕದೊಳಗಿರುವಳು

ಬುಧವಾರ, ಮೇ 25, 2011

ಎಡ್ಸ್ ಮತ್ತು ವಚನಗಳು -" ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ "

ಒಂದು ಸಮಾರಂಭದಲ್ಲಿ ಶರಣರ ಮತ್ತು ವಚನ ಸಾಹಿತ್ಯದ ಬಗ್ಗೆ ಗೋಷ್ಠಿ ನಡೆದಿತ್ತು ..


ಭಾಷಣಕಾರ -- ಶರಣರ ವಚನಗಳು ಹಿಂದೆ , ಇಂದು ಮತ್ತು ಮುಂದು ಕೂಡ ಪ್ರಸ್ತುತ . ಎಲ್ಲರ ಬಾಳು ಬಂಗಾರವಾಗಿಸುವ ತತ್ವಗಳು ಶರಣರ ವಚನಗಳಲ್ಲಿವೆ ..

ಸಭೆಯ ಮೂಲೆನಲ್ಲಿ ಕುತವನೊಬ್ಬ ಎದ್ದು ಕೇಳಿದ -- ಅಯ್ಯ , ನಾನಗೆ ಎಡ್ಸ್ ರೋಗ ಬಂದಿದೆ .. ಈ ರೋಗ ಬಾರದಿರಲು ನಿಮ್ಮ ಶರಣರು ಏನು ಹೇಳಿದ್ದಾರೆ ?

ಭಾಷಣಕಾರ -- ಒಂದೇ ಸಾಲಿನಲ್ಲಿ ಹೇಳಿದರು- ಶರಣರು ೧೨ನೇ ಶತಮಾನದಲ್ಲಿ ಹೇಳಲಿದ್ದಾರೆ " ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ "

(ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ. )

ಬುಧವಾರ, ಮೇ 18, 2011

ನಮ ಗುಲ್ಬರ್ಗ RJ's...

ನಮ ಗುಲ್ಬರ್ಗ RJ's...-RJ Raghu, RJ Dinesh, RJ ARUN(me), RJ Ambika, RJ Vani

ನನ್ನ ಕಲ್ಪನಾ ಲೋಕ ಬಲು ಸುಂದರ

ನನ್ನ ಕಲ್ಪನಾ ಲೋಕ ಬಲು ಸುಂದರ



ಚೆಂದದ ಚೆಲುವಿನ ಮೊಗದವಳು

ಅವಳ ಮೋಹಕ ಕಣ್ಣುಗಳು ಹೊಳೆಯುತಿಹವು ,

ಮಲ್ಲಿಗೆ ತೋಟದಲ್ಲಿ ನಿಂತು ನಗುತ್ತಿಹಳು,,

ಅವಳ ಅಂದಕೆ ನಾ ಮನಸೋತೆನು ..

ಇವಳೇ ನನ್ನ ಕಲ್ಪನೆಯ ಚೆಲುವೆ ...



ಒಬ್ಬನೇ ಏಕಾಂತದಲ್ಲಿ ಕುತಿರಲು ,

ಈ ತರಹ ಕಲ್ಪನಾ ಲೋಕದೊಳಗಿರಲು ,

ಸುಂದರ ಸುಂದರ ಮೊಗದ ಚೆಲುವೆಯರು ,

ನನ್ನ ಕಲ್ಪನಾ ಲೋಕದಲ್ಲಿ ಸುಳಿದಾಡುತ್ತಿಹರು...

ಎಲ್ಲಿಹಳು ನನ್ನ ಕಲ್ಪನೆಯ ಚಲುವು ,?



ಕಲ್ಪನಾ ಲೋಕ ಬಲು ಸುಂದರ ,

ಸುಂದರ ಲೋಕದೊಳಗೆ ಕಲ್ಪನಾ ಚೆಲುವೆ ಇನ್ನು ಸುಂದರ,

ಕಲ್ಪನೆ ವಾಸ್ತವ ಆಗಲಿ , ಆಗ ನನ್ನ ಬದುಕು ಸುಂದರ,,

ಇದು ನನ್ನ ಕಲ್ಪನೆಯ ಕವನ , ಇಲ್ಲಿ ಭಾವನೆಗಳೇ ಸುಂದರ ..

                                                                        -ರಚನೆ- ನಾನೇ ನಿಮ್ಮ RJ ಅರುಣ

ಬುಧವಾರ, ಮೇ 11, 2011

ಕನಸಿನ ಹುಡುಗಿ ಹೇಗಿರಬೇಕೆಂದು

ಕೆಲ ಹುಡುಗಿಯರು ಕೇಳುತ್ತಾರೆ ಈ ಅರುಣನಿಗೆ


ಅರುಣ ನಿನ್ನ ಕನಸಿನ ಹುಡುಗಿ ಹೇಗಿರಬೇಕೆಂದು ..!

ಹೇಳುತ್ತಿಲ್ಲ ಯಾರ್ರು ,

ನಾನೇ ನಿನ್ನ ಕನಸಿನ ರಾಣಿ ಎಂದು !